berklee ಕಾಲೇಜ್ ಆಫ್ ಮ್ಯೂಸಿಕ್ ನ ವಿದೇಶಿ ಸಂಗೀತಗಾರರ ತಂಡ ಪ್ರಸ್ತುತ ಪಡಿಸಿದ “ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು” ಹಾಡು ಎಂತಹ ಕಲ್ಲಿನ ಎದೆಯಲ್ಲೂ ರೋಮಾಂಚನವನ್ನು ಉಂಟು ಮಾಡುವ ಹಾಗಿತ್ತು .
ಈ ಹಾಡು ಅವರು 54 ನೇ ಗಣೇಶ ಉತ್ಸವದಲ್ಲಿ ಹಾಡಿದರು. ನಮ್ಮ ಹೆಮ್ಮೆಯ ವಿಜಯ್ ಪ್ರಕಾಶ್ ಇದರ ಸಾರಥ್ಯ ವಹಿಸಿದ್ದರು . ವಿದೇಶಿಯರು ನಮ್ಮ ಕನ್ನಡ , ಕಸ್ತೂರಿ ಕನ್ನಡ ಎಂದಾದ ಮನ ಪುಳುಕಿತವಾಗೋದು ಖಂಡಿತ.
ರಘು ದೀಕ್ಷಿತ್ ಒಂದು ಕಡೆ ಕನ್ನಡದ ಕಂಪು ಪಸರಿಸುತ್ತಿದ್ದರೆ ಇನ್ನೊಂದು ಕಡೆ ನಮ್ಮ ವಿಜಯ್ ಪ್ರಕಾಶ್ ಕಸ್ತೂರಿ ಕನ್ನಡವನ್ನು ಹರಡುತ್ತಿದ್ಧಾರೆ.
ನಮ್ಮ ನೆಲ, ಜಲ ,ಭಾಷೆಯ ಮಹತ್ವ ಸಾರುವ ಈ ಹಾಡು ಸಂಗೀತ ರಸಿಕರ ಮನ ಪುಳಕಗೊಳಿಸಿದ್ದು ಹೀಗೆ ಕೇಳಿ ಆನಂದಿಸಿ.